Quantity
Product Description
`ಪ್ರಸಿದ್ಧ ವಿಮರ್ಶಕರಾದ ಶ್ರೀ ಎಸ್ ಆರ್. ವಿಜಯಶಂಕರ ಅವರು ಹೀಗೆ ಹೇಳಿದ್ದಾರೆ
ಡಾ. ಚಂದ್ರಶೇಖರ ಕಂಬಾರರು ನಂಬಿಕೆಯಲ್ಲಿ ಆಸ್ತಿಕರು. ಕೊನೆಗೂ ಈ ಲೋಕದಲ್ಲಿ ಕೇಡಿನ,ದುಷ್ಟಶಕ್ತಿಗಳ ವಿರುದ್ಧ ಸಾತ್ವಿಕ ಶಕ್ತಿ ಗೆಲ್ಲುತ್ತದೆ ಎಂಬುದು ಅವರ ಪೂರ್ಣ ವಿಶ್ವಾಸ. ಆದರೆ,ಈ ವಿಶ್ವಾಸ ಆಧುನಿಕ ಬದುಕಿನ ಸಂಕೀರ್ಣ ಅನುಭವ, ಕೆಡುಕಿನ ಅಪರಿಮಿತ ಸಾಧ್ಯತೆಗಳಿಗೆ ಕುರುಡಾಗುವುದಿಲ್ಲ. ಸಾತ್ವಿಕ ಶಕ್ತಿಗಳ ಕೊನೆಯ ವಿಜಯದ ಮೆಟ್ಟಿಲೇರುವ ಮೊದಲು ಅನುಭವಿಸಬೇಕಾದ ಸೋಲುಗಳನ್ನು ಕಡೆಗಣಿಸುವುದಿಲ್ಲ. ಚರಿತ್ರೆ ಮತ್ತು ವರ್ತಮಾನದ ಮೌಲ್ಯಗಳ ಪರಸ್ಪರ ಸಂಘರ್ಷವನ್ನು ನಿರೂಪಿಸಲು ಡಾ. ಕಂಬಾರರು ಚಾಂದಬೀ ಸರಕಾರದ ಕಥೆಯಾಗಿ,ಮುಖ್ಯಮಂತ್ರಿಗಳಾಗಿದ್ದಾಗ ದೇವರಾಜ ಅರಸು ಅವರು ಭೂ ಮಸೂದೆ ಕಾಯಿದೆಯನ್ನು ಜಾರಿಗೆ ತಂದಾಗ ಉಂಟಾದ ಸಾಮಾಜಿಕ ಸ್ಥಿತ್ಯಂತರವನ್ನು ಬಳಸುತ್ತಾರೆ. ಬಲದೇವ ನಾಯಕ ಆ ತನಕ ಬೆಳೆದು ಬಂದ ಜಮೀನ್ದಾರೀ ಪದ್ದತಿಯ ಕೊನೆಯ ಕೊಂಡಿ. ಪ್ರೇಯಸಿಯಂತೆ ಆತನ ಮನೆಗೆದ್ದು ಪತ್ನಿಯಾದವಳು ಚಾಂದಬೀ.
"ಚಾಂದಬೀ ಸರಕಾರ" ಕಾದಂಬರಿ,ಸಮಕಾಲೀನತೆಯ ಸವಾಲುಗಳನ್ನು ಬದಲಾಗುವ ಚರಿತ್ರೆಯ ಸಂಕ್ರಮಣ ಸ್ಥಿತಿಯಲ್ಲಿ ಶೋಧಿಸುತ್ತದೆ.
ಭೂ ಮಸೂದೆಯ ಕಾಲದ ಅನುಭವದ ಬಗೆಗಿನ ಅಪರೂಪವಾದೊಂದು ಕಥಾನಕವಿದು
Width
20 CMS
Height
1 CMS
Weight
300 GMS
Length
22 CMS
Binding
Soft Bound
Publisher
Ankitha Pusthaka
ISBN-10
9789392230035
Author
Dr Chandhrashekar Kambara
Publication Year
2021
Genre
9789392230035
Language
Kannada