Product Description
ಹಿಂದೆ ಶಿಕ್ಷಕ ಎಂದರೆ ಒಂದು ಘನತೆತ್ತು, ಗೌರವವಿತ್ತು. ಪ್ರತೀ ಕುಟುಂಬ ತಮ್ಮ ಮಕ್ಕಳ ಭವಿಷ್ಯ ಕುರಿತು ಚಿಂತಿಸುವಾಗ ಅಲ್ಲಿ ಶಿಕ್ಷಕ ಭರವಸೆಯ ಬೆಳಕಾಗಿದ್ದ. ಆದರೆ ಇಂದೇಕೋ ಅದು ಗೌಣವಾಗುತ್ತಿದೆಯೇನೋ ಅನಿಸುತ್ತಿದೆ. ಕಾರಣ ಶಿಕ್ಷಣದ ವ್ಯಾಪಾರೀಕರಣ. ಹಾಗಿದ್ದರೂ ನಮ್ಮ ಸಮಾಜ ಶಿಕ್ಷಕನ ಜವಾಬ್ದಾರಿಗಳನ್ನು, ಮೌಲ್ಯಗಳನ್ನು ಮರೆತಿಲ್ಲ. ಏಕೆಂದರೆ ಆತ ‘ನಾಳಿನ ಯಶಸ್ವೀ ಪ್ರಜೆಗಳ ರೂವಾರಿ’. ಸ್ವಸ್ಥ ಸಮಾಜದ ನಿರ್ಮಾರ್ತೃ. ಮಕ್ಕಳನ್ನು ತಿದ್ದಿ-ತೀಡಿ ಪ್ರೋತ್ಸಾಹಿಸಿ ಅವರ ಬುದ್ಧಿಯನ್ನು ಸೌಜನ್ಯದಿಂದ ಒರೆಹಚ್ಚಿ, ಅವರ ಬದುಕನ್ನು ಮೌಲ್ಯಯುತವಾಗಿ ಕಟ್ಟಿಕೊಡುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕನದಾಗಿರುತ್ತದೆ. ಹಾಗಾದರೆ ಯಶಸ್ವೀ ಶಿಕ್ಷಕರಾಗಲು ಏನು ಮಾಬೇಕು? ಲೇಖಕರು ಹಲವು ಸರಳ ಸೂತ್ರಗಳನ್ನು ಇಲ್ಲಿ ತಿಳಿಸಿದ್ದಾರೆ. ಶಿಕ್ಷಕ, ಚಿಂತಕ ಶ್ರೀ ಅರವಿಂದ ಚೊಕ್ಕಾಡಿ ಈ ಪುಸ್ತಕದ ಲೇಖಕರು.