Product Description
ಕಾಲದ ನಿಜವಾದ ಅರಿವುಳ್ಳವನು ಪ್ರತಿ ಕ್ಷಣವನ್ನು ಅತ್ಯಂತ ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾನೆ. ದಿನ ನಿತ್ಯದ ರೊಟೀನ್ ಕೆಲಸ ಕಾರ್ಯಗಳ ನಡುವೆಯೂ ಚೆಂದದ್ದೊಂದು ಬದುಕು ಕಟ್ಟಿಕೊಳ್ಳಲು ಸಾಧ್ಯ. ಅದಕ್ಕೆ ಕ್ರಿಯಾಶೀಲ ಮನಸ್ಸು ಬೇಕಷ್ಟೆ. ಅಯ್ಯೋ! ಟೈಂ ಎಲ್ಲಿದೆ ಮಾರಾಯ ಎನ್ನು ಸೋಂಭೇರಿತನಕ್ಕೆ, ನಿರ್ಲಕ್ಷ್ಯಕ್ಕೆ ಬೇಕಡದ ಕಾಡು ಹರಟೆಗಳಿಗೆ ಕಡಿವಾಣ ಹಾಕಿ, ನಿಮ್ಮ ಅಮೂಲ್ಯ ಸಮಯವನ್ನು ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಚಿತ್ರಕಲೆ-ಸಂಗೀತ-ಸಾಹಿತ್ಯ-ಆಟೋಟ-ಕಸೂತಿ-ಓದು-ಬರೆಹ-ಸಮಾಜಸೇವೆ ಇತ್ಯಾದಿ ಎಷ್ಟೊಂದು ವಿಧಾನಗಳಿವೆ. ಎಷ್ಟೊಂದು ವಿಷಯಗಳಿವೆ. ಕಾಲವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದೂ ಒಂದು ಕಲೆ ಎನ್ನು ಗುಟ್ಟು ತಿಳಿದವನಿಗೆ ಬದುಕು ಒಂದು ಕ್ರಿಯಾಶೀಲ ಮಾಧ್ಯಮವಾಗುತ್ತದೆ. ಶ್ರೀಮತಿ ಕಮಲಾ ರಾಮಸ್ವಾಮಿ ಈ ಪುಸ್ತಕದ ಲೇಖಕರು.