Quantity
Product Description
ಡಾ. ಸ್ವಾಮಿನಾಥ ಅಯ್ಯರ್ ಅವರದು ಪರಿಪಕ್ವವಾದ ಪಾಂಡಿತ್ಯ. ವೃತ್ತಿ, ಸಂಶೋಧನೆ, ಪಾಂಡಿತ್ಯ ಸತತಾಭ್ಯಾಸಗಳಿಂದ ರೂಪಿತವಾದುದು ಅವರ ಸ್ವಚ್ಛ ಗದ್ಯಶೈಲಿ. `ಅದರಲ್ಲಿ ಸದಾಚಾರವೂ ಸಂಸ್ಕೃತಿಯೂ ಗಮಗಮಿಸುತ್ತಿರುತ್ತದೆ. ಪಾಂಡಿತ್ಯವೂ ಪ್ರಸಾದವೂ ಒಂದುಗೂಡಿದೆ. ಅರಿವೂ ಸವಿಯೂ ಹೆಣೆದುಕೊಂಡಿದೆ'. ಬಿ.ಜಿ.ಎಲ್. ಸ್ವಾಮಿಯವರು ಅಯ್ಯರ್ ಅವರ ಸಾಹಿತ್ಯದ ಸೊಬಗನ್ನು ಇಲ್ಲಿ ಸೆರೆಹಿಡಿದಿಟ್ಟಿದ್ದಾರೆ. ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧಗಳ ಈ ಸಂಕಲನದಲ್ಲಿ ಗ್ರಂಥಸಂಪಾದನೆ, ಕವಿಕತೆ, ಕಥಾನಕ, ಸಂಗೀತಕ್ಕೆ ಸಂಬಂಧಿಸಿದ ಅರಳಿದ ಮೊಗ್ಗುಗಳಿವೆ. ಮೂಲ ಲೇಖಕರ (ತಮಿಳು) ಶೈಲಿಯ ಸತ್ತ್ವವನ್ನು ಕನ್ನಡದಲ್ಲಿ ತಂದಿರುವುದು ಅನುವಾದಕರ ಒಂದು ಅಪೂರ್ವ ಸಾಧನೆ.
Weight
225 GMS
Length
0 CMS
Width
0 CMS
Height
0 CMS
Publisher
Ankitha Pusthaka
Language
Kannada