Product Description
ನಮ್ಮ ದೇಶದಲ್ಲಷ್ಟೇ ಅಲ್ಲ, ಪ್ರಪಂಚದಾದ್ಯಂತ ಶಾಪದಂತೆ ಕಾಡುತ್ತಿರುವ ಭ್ರಷ್ಟಾಚಾರಕ್ಕೆ ಶ್ರೀಸಾಮಾನ್ಯ ಇಂದು ರೋಸಿ ಹೋಗಿದ್ದಾನೆ. ಇದನ್ನು ತಡೆಗಟ್ಟುವ, ನಿಯಂತ್ರಿಸುವ ಪ್ರಯತ್ನಗಳು ಎಲ್ಲ ರಾಷ್ಟ್ರಗಳಲ್ಲೂ ನಡೆದೇ ಇವೆ. ಕರ್ನಾಟಕದಲ್ಲೂ ಲೋಕಾಯುಕ್ತರು ಭ್ರಷ್ಟಾಚಾರದ ಹೆಮ್ಮರವನ್ನು ಅಲುಗಾಡಿಸಿ, ಮುಖ್ಯಮಂತ್ರಿಗಳನ್ನೂ ಒಳಗೊಂಡಂತೆ ಅನೇಕ ಮಂತ್ರಿಗಳು, ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ತಮ್ಮ ವರದಿಯನ್ನು ಸಲ್ಲಿಸಿ ಒಂದು ಸರಕಾರವು ರಾಜೀನಾಮೆ ನೀಡುವುದಕ್ಕೆ ಕಾರಣರಾಗಿದ್ದಾರೆ. ಭ್ರಷ್ಟಾಚಾರಕ್ಕೆ ಇದೊಂದು ಹಿನ್ನಡೆಯೇ ಸರಿ. ಓಮ್ಬಡ್ಸ್ಮನ್ ಎಂಬುದಾಗಿ ಪ್ರಾರಂಭದಲ್ಲಿ ವಿದೇಶಗಳಲ್ಲಿ ಪರಿಚಿತವಾಗಿ ಈತ ಭಾರತದಲ್ಲಿ ಲೋಕ್ಪಾಲ್ , ಜನ್-ಲೋಕ್ಪಾಲ್, ಲೋಕಾಯುಕ್ತ ಪದವಿಗಳೆಂದು ಉಲ್ಲೇಖಿತವಾಗಿರುವ, ಎಲ್ಲರಿಗೂ ಆತ್ಮೀಯವಾಗಿ ಕಾಣುವ ಪ್ರಖರ ಕಾನೂನು ಇದು. ಈ ಲೋಕ್ಪಾಲ್ ಎಂದರೇನು ? ಅದರ ಕಾರ್ಯವ್ಯಾಪ್ತಿ ಏನು ? ಇದರಿಂದ ಭ್ರಷ್ಟಾಚಾರ ನಿರ್ಮೂಲನೆಯಾಗಿ ಆಡಳಿತ ಯಂತ್ರ ಸುಧಾರಿಸುತ್ತದೆಯೇ ? ಈ ಮಸೂದೆಯಲ್ಲಿನ ಲೋಪಗಳೇನು ? ಇದನ್ನು ತಿಳಿಯಲು ಎಲ್ಲರಿಗೆ ಹಕ್ಕಿದೆ ಮಾತ್ರವಲ್ಲ ಕುತೂಹಲವೂ ಇದೆಯಲ್ಲವೆ ? ಶ್ರೀಸಾಮಾನ್ಯನಿಗೆ ಅವಶ್ಯವಿರುವ ಇಂತಹ ಮಾಹಿತಿಗಳನ್ನು ಇಲ್ಲಿ ಶ್ರೀ. ವೈ. ಜಿ. ಮುರಳೀಧರ ಸೊಗಸಾಗಿ ತಿಳಿಸಿಕೊಟ್ಟಿದ್ದಾರೆ.