Product Description
೬೫ ವರ್ಷಗಳ ಹಿಂದೆ ಪ್ರಕಟವಾದ ಆ ಕಾಲದ ಅತ್ಯಂತ ಜನಪ್ರಿಯ ಅತ್ಯುತ್ತಮ ಎಂದೆನಿಸಿ ಸುಪ್ರಸಿದ್ಧವಾದ ಕನ್ನಡ ಕೃತಿ 'ಗುರುಕುಲ ಕಥಾವಳಿ'. ಇದನ್ನು ಬರೆದ ದಿವಂಗತ ಎ.ಕೆ. ಪುಟ್ಟ್ರಾಮು ಅವರು ನ್ಯಾಷನಲ್ ಸ್ಕೂಲ್ನಲ್ಲಿ ಕನ್ನಡ ಉಪಾಧ್ಯಾಯರಾಗಿದ್ದರು. ಕೆಲವು ಉತ್ತಮ ಮಟ್ಟದ ಗಂಭೀರ ಕೃತಿಗಳನ್ನು ಅವರು ರಚಿಸಿದರು. ಅದರಲ್ಲಿ 'ಭರ್ತೃಹಿರಯ ವೈರಾಗ್ಯ ಶತಕ'ದ ಕನ್ನಡ ಪದ್ಯಾನುವಾದ ಅತ್ಯಂತ ಗಮನಾರ್ಹವಾದದ್ದು. 'ವಿದ್ವತ್ತು- ಪ್ರತಿಭೆಗಳ ಅಪೂರ್ವ ಸಂಗಮ' ಎಂದು ಸಾಹಿತ್ಯ ವಲಯದಿಂದ ಕರೆಸಿಕೊಂಡ ಕೃತಿ.
'ಗುರುಕುಲ ಕಥಾವಳಿ' ಪುರಾಣ ಕಾಲದ ಹದಿನಾರು ಮಹಾನ್ ಪಾತ್ರಗಳ ಗುರುಕುಲ ಸಂದರ್ಭದ ಘಟನಾವಳಿಗಳ ಸ್ವಾರಸ್ಯ. ಸುಂದರಕಥಾನಕ. ಇಲ್ಲಿನ ಆದರ್ಶ ಮಹಾಪುರುಷರ ಕಥೆಗಳು ಇಂದಿನ ಮಕ್ಕಳ-ಯುವಕರ ಬದುಕಿಗೊಂದು ಮಾದರಿ ಎನಿಸಬಹುದು. ವ್ಯಕ್ತಿತ್ವ ವಿಕಸನ ಪ್ರಕ್ರಿಯೆಯಲ್ಲೂ ಮಾರ್ಗದರ್ಶಕವಾಗಬಹುದು.