ತಮ್ಮ ಬಹುಚರ್ಚಿತ 'ಉತ್ತರಾಯಣ' ಕವಿತೆಯ ನಂತರ ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿಯವರು ಓದುಗರ ಕೈಗಿಟ್ಟಿರುವ ಕವಿತಾಸಂಗ್ರಹ ಇದು. ಆ ಪದ್ಯದ ರೂಪಾಂತರದಂತಿರುವ 'ವೈದೇಹಿ' ಇಲ್ಲಿನ ಮೊದಲ ಕವಿತೆ. ಅದಲ್ಲದೆ ಇಲ್ಲಿ ಎಚ್ಎಸ್ವಿಯವರು ವರ್ಡ್ಸ್ವರ್ತ್ ಮತ್ತು ಟ್ಯಾಗೋರರ ಕೆಲವು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.ಜತೆಗೆ ರಾಧೆ ಮತ್ತು ಕೃಷ್ಣರ ಸ್ನೇಹವನ್ನಾಧರಿಸಿದ ಹತ್ತು ಗೀತೆಗಳನ್ನೂ ನಾವಿಲ್ಲಿ ಓದಬಹುದು.