Product Description
೧೯೮೬ರಲ್ಲಿ ತಮ್ಮ ಬಂಡಾಯ ಕಾದಂಬಿರಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ ಶ್ರೀ ವ್ಯಾಸರಾಯ ಬಲ್ಲಾಳರು ಪ್ರಮುಖವಾಗಿ ತಮ್ಮ ಕಥೆ, ಕಾದಂಬರಿ, ಲೇಖನಗಳಲ್ಲಿ ಮುಂಬುಯ ಬದುಕಿನ ಅನಂತ ಮುಖಗಳನ್ನು ಅನಾವರಣಗೊಳಿಸಿರುವಂಥವರು. “ ಈ ನಗರದಲ್ಲಿ ವಾಸಿಸದೆ ಅವರು ಬೇರೆ ಎಲ್ಲಿ ಇದ್ದರೂ, ಇಷ್ಟು ದೊಡ್ಡ ಲೇಖಕರಾಗುತ್ತಿರಲಿಲ್ಲ” ಎನ್ನವಷ್ಟರಮಟ್ಟಿಗೆ ಮುಂಬು ಮಹಾನಗರದ ಬದುಕಿನೊಂದಿಗೆ ತಾದಾತ್ಮ್ಯವನ್ನೇರ್ಪಡಿಸಿಕೊಂಡಿರುವಂಥವರು. ಕೌಟುಂಬಿಕ ಜೀವನದ ಹಿನ್ನೆಲೆಯನ್ನು ಒಳಗೊಂಡಂತೆ ಅಥವಾ ಸ್ವಾತಂತ್ರ್ಯ ಸಂಗ್ರಾಮದ ಧ್ಯೇಯಾದರ್ಶಗಳ ತಾಕಲಾಟವನ್ನು ಅಥವಾ ಸಾಮಾಜಿಕ ವಿಚಾರಧಾರೆಯನ್ನು ಅಥವಾ ಕಾರ್ಮಿಕರ ಬದುಕು-ಬವಣೆಗಳನ್ನು ಕೇಂದ್ರವಾಗಿಸಿಕೊಂಡು ಅವರು ರಚಿಸಿರುವ ಬಹುತೇಕ ಕೃತಿಗಳಲ್ಲಿ ವಸ್ತು, ಪಾತ್ರಸ್ಟೃ ಮತ್ತು ಚಿಂತನೆಗಳು ಸಮರಸವಾಗಿ ಬೆರೆತು ಸಾಗುತ್ತವೆ. ವ್ಯಾಸರಾಯ ಬಲ್ಲಾಳರ ಕೃತಿಗಳ ಮೇಲೆ ಅಧ್ಯಯನ ನಡೆಸಿ ಪಿಎಚ್.ಡಿ. ಪದವಿ ಪಡೆದ ಡಾ|| ಡಿ. ವಿಜಯಲಕ್ಷ್ಮಿ ಈ ಪುಸ್ತಕದ ಲೇಖಕರು.