Quantity
Product Description
ಕನ್ನಡದ ಮಹತ್ವದ ಬರಹಗಾರರಾದ ಡಾ. ಕೆ. ಸತ್ಯನಾರಾಯಣರವರು ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಓದಿಗಾಗಿ ತಾವು ಮಾಡಿಕೊಂಡಿದ್ದ ಟಿಪ್ಪಣಿಗಳ ಪುಸ್ತಕ ಚಿನ್ನಮ್ಮನ ಲಗ್ನ-1893. ಈ ಪುಸ್ತಕ ಕುವೆಂಪು ಅವರ ಕಾದಂಬರಿಗಷ್ಟೇ ಅಲ್ಲದೆ ಸಾಹಿತ್ಯದ ಓದಿಗೂ ಒಂದು ಅತ್ಯುತ್ತಮ ಆಕರ ಗ್ರಂಥ. ಕಾದಂಬರಿಯ ಪ್ರತಿ ಅಧ್ಯಾಯವನ್ನು ಎಳೆ ಎಳೆಯಾಗಿ, ತುಲನಾತ್ಮಕವಾಗಿ ಪರೀಕ್ಷಿಸಿ, ಕಾದಂಬರಿಯ ಸಂಕೀರ್ಣತೆಯನ್ನು ಎಲ್ಲಿಯೂ ಮರೆಯದೆ, ಆಳವಾಗಿ ಮತ್ತು ಸಮಗ್ರವಾಗಿ ಚಿಂತಿಸಿ, ಈ ಪುಸ್ತಕವನ್ನು ಬರೆಯಲಾಗಿದೆ. ಸಾಹಿತ್ಯದ/ಕಾದಂಬರಿಯ ವಿಸ್ತಾರವನ್ನು ಗ್ರಹಿಸಲು ಅನುವು ಮಾಡಿಕೊಡುವ ಇಂತಹ ಪುಸ್ತಕಗಳು ಕನ್ನಡದಲ್ಲಿ ಇಲ್ಲವೆಂದೇ ಹೇಳಬಹುದು. ಕುವೆಂಪುರವರ ಕಥನಗಾರಿಕೆ ಯಾರನ್ನೇ ಆಗಲಿ ಬೆರಗುಗೊಳಿಸುವಂಥದ್ದು. ಆ ಬೆರಗನ್ನು ಅರ್ಥ ಮಾಡಿಕೊಳ್ಳಲು ಈ ಪುಸ್ತಕ ಎಲ್ಲ ರೀತಿಯಲ್ಲಿಯೂ ಸಹಾಯ ಮಾಡಬಲ್ಲದು.
Publication Year
2020
Publisher
Ankitha Pusthaka
ISBN-13
9789381055700
Number of Pages
123
Author
K Satyanarayana
Binding
Soft Bound
Weight
500 GMS
Language
Kannada