Product Description
ಯುವಜನತೆಯಲ್ಲಿ ಇಂದು ತೀವ್ರಸ್ವರೂಪದ ಅತೃಪ್ತಿ, ಹತಾಶೆ ಹಾಗೂ ವೈರಾಗ್ಯ ಮನೆಮಾಡಿದೆ. ಈ ಸ್ಥಿತಿಗೆ ಪ್ರತಿಸ್ಪಂದಿಸುವ ಜೆಕೆ ಅವರ ಮಾತುಗಳು ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೆ ಗುರು ಮತ್ತು ತನಗೆ ತಾನೆ ಶಿಷ್ಯನಾಗಬೇಕೆಂದು ನಿರ್ದೇಶಿಸುತ್ತವೆ. ತಮ್ಮ ಮಾತುಗಳನ್ನು ಸ್ವಸ್ವರೂಪ ದರ್ಶನ ಮಾಡಿಸುವ ಕನ್ನಡಿಯ ಹಾಗೆ ಬಳಸಿಕೊಂದು ಅಸ್ತಿತ್ವದ ಅಖಂಡತೆಯನ್ನು ಗಮನಿಸಿ ಎಂದು ಅವರು ನಮಗೆ ಮನವರಿಕೆ ಮಾಡಿಕೊಡುತ್ತಾರೆ. ಈ ಬಗೆಯಲ್ಲಿ ಕಾಣುವುದಕ್ಕೆ ಬಗೆಯು ಪೂರ್ಣ ಮುಕ್ತವಾಗಿರಬೇಕು. ಯಾವುದೇ ಬಗೆಯ ಅಧಿಕಾರ ವ್ಯವಸ್ಥೆಗೆ ದಾಸನಾಗಿರಕೂಡದು.
ಸ್ವಾತಂತ್ರ್ಯ ಅಥವಾ ಬಿಡುಗಡೆ ಎಂಬುದು ಸ್ವಮೋಹಿಯಾದ ಅಶಿಸ್ತಿನ ಜೀವನ ಎಂದು ತಪ್ಪಾಗಿ ಭಾವಿಸಬಾರದು. ಕೃಷ್ಣಮೂರ್ತಿಯವರು ಪ್ರತಿಪಾದಿಸುವ ಬಿಡುಗಡೆ ದೊರೆಯಬೇಕಾದರೆ ವ್ಯಕ್ತಿಯ ಮನೋಲೋಕದಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕು. ತನ್ನಲ್ಲಿರುವ ಜ್ಞಾನವನ್ನು ಮನಸ್ಸು ಬರಿದುಮಾಡಿಕೊಂಡಾಗ ಮನುಷ್ಯನಲ್ಲಿ ಆಮೂಲಾಗ್ರ ಪರಿವರ್ತನೆ ಸಾಧ್ಯ.