Product Description
ಬನವಾಸಿ ಬಳಗ ಶುರುವಾದ 5ನೇ ವರ್ಶದ ನೆನಪಿಗಾಗಿ 2009 ರಿಂದೀಚೆಗಿನ “ಏನ್ ಗುರು” ಬರಹಗಳನ್ನು ಆಯ್ದು 5 ಸರಣಿ ಹೊತ್ತಗೆಗಳಾಗಿ ಹೊರತರಲಾಗಿದೆ.
ಕನ್ನಡಿಗರ ನಿಜಗುರುತು, ಹೊರ ಜಗತ್ತಿನೊಂದಿಗೆ ನಮ್ಮ ಕೊಡುಕೊಳ್ಳುವಿಕೆ, ನಮ್ಮ ಬದುಕಿನ ಮೇಲೆ ಪ್ರಭಾವ ಬೀರುತ್ತಿರುವ, ನಮ್ಮ ಬದುಕನ್ನು ನಿಯಂತ್ರಿಸುತ್ತಿರುವ ಅನೇಕ ಅಂಶಗಳು – ಅವು ಬೀರುತ್ತಿರುವ ಪರಿಣಾಮಗಳು – ಇವೆಲ್ಲವನ್ನೂ ಯಾವುದೇ ತೆರೆಯಿರದೆ ನೋಡುವ ಪ್ರಯತ್ನವನ್ನು ಈ ಹೊತ್ತಗೆಗಳಲ್ಲಿ ಮಾಡಲಾಗಿದೆ. ಈ ದಿಟಗಳು ಕನ್ನಡಿಗರ ಅರಿವಿಗೆ ಬಂದಲ್ಲಿ ಒಬ್ಬೊಬ್ಬರ ಎದೆಯೊಳಗೂ ಇರುವ ಹ್ರುದಯ ಶಿವ, ಎಲ್ಲರಲ್ಲೂ ನಿಜ ಎಚ್ಚರದ ಕನ್ನಡ ಡಿಂಡಿಮವನ್ನು ನುಡಿಸುವುದು ಖಂಡಿತಾ! ಈ ಹಿನ್ನೆಲೆಯಲ್ಲಿ ನಮ್ಮ ಹೊತ್ತಗೆಗೆ “ಕನ್ನಡ ಡಿಂಡಿಮ” ಎಂದು ಹೆಸರಿಡಲಾಗಿದೆ.
“ಕನ್ನಡ ಡಿಂಡಿಮ!” ಹೊತ್ತಗೆಯು “ಟೋಟಲ್ ಕನ್ನಡ” ಮತ್ತು “ನವಕರ್ನಾಟಕ ಪ್ರಕಾಶನ” ಹೊತ್ತಗೆ ಮಳಿಗೆಗಳಲ್ಲಿ ಕೊಂಡುಕೊಳ್ಳಲು ಸಿಗುತ್ತಿದೆ. ಹೊತ್ತಗೆಯನ್ನು ಕೊಂಡು ಓದಿ.