ಈ ಪುಸ್ತಕದಲ್ಲಿ ಲಂಕೇಶ್ ಪತ್ರಿಕೆ ವಿಶೇಷಾಂಕದಲ್ಲಿ ಪ್ರಕಟಗೊಂಡಿದ್ದ ಲೇಖನಗಳನ್ನು, ಅವರ ಅಗಲಿಕೆಯ ನಂತರ ಬರೆದ ಶ್ರದ್ಧಾಂಜಲಿಗಳನ್ನು ಮತ್ತು ಎರಡು ಸಂದರ್ಶನಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಅನಂತಮೂರ್ತಿಯವರನ್ನು ಓರ್ವ ಲೇಖಕನಾಗಿ ಮಾತ್ರ ನೋಡದೆ ಕೋಮುವಾದ ವಿರುದ್ಧದ ಅವರ ಬದ್ಧತೆ ಹಾಗು ಸಾಮಾಜಿಕ ಕಾಳಜಿಯನ್ನೂ ಇಲ್ಲಿನ ಲೇಖನಗಳು ಹಿಡಿದಿಟ್ಟಿವೆ.