ಭೌಗೋಳಿಕ ಮತ್ತು ಪ್ರಾಕೃತಿಕ ಕಾರಣಗಳಿಂದ ನದಿಗಳು ತಮ್ಮ ಪಾತ್ರದ ದಿಕ್ಕು ಬದಲಿಸಿ ಕೊಳ್ಳುವುದು, ಬತ್ತಿಹೋಗುವುದು, ಭೂಮಿಯೊಳಗೆ ಇಂಗಿ ಹೋಗುವುದು ಅಚ್ಚರಿಯ ವಿಷಯವಲ್ಲ. ಹಾಗೆಯೇ ಅನೇಕರು ಗುಪ್ತಗಾಮಿನಿ ಎಂದು ನಂಬುವ ಸರಸ್ವತೀ ನದಿಯ ವಿಷಯ ಸಹ. ಹಿಮಾಲಯದ ಉತ್ಥಾನದೊಂದಿಗೆ ಸರಸ್ವತೀ ನದಿಯ ಬದುಕು ಸಾಗಿದುದರಿಂದ ಇದು ಅಚ್ಚರಿಯ ವಿಷಯವಲ್ಲ ಎಂಬುದನ್ನು ಇಲ್ಲಿ ಭೂವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಣೆ ನಡೆಸಿದ್ದಾರೆ ಈ ಕೃತಿಯ ಲೇಖಕರಾದ ಶ್ರೀ ಟಿ.ಆರ್. ಅನಂತರಾಮು.