Product Description
ಕವಿಯೆಂದೇ ಪ್ರಖ್ಯಾತರಾಗಿರುವ ಬಿ.ಆರ್.ಲಕ್ಷ್ಮಣರಾವ್ ಕತೆ, ನಾಟಕ, ವ್ಯಕ್ತಿಚಿತ್ರ, ಪ್ರಬಂಧ - ಹೀಗೆ ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೆಲಸ ಮಾಡಿರುವವರು. ಆದರೂ ಅವರ ಪ್ರಿಯ ಕ್ಷೇತ್ರ ಕಾವ್ಯ. ‘ನನ್ನ ಮಟ್ಟಿಗೆ’ ಅವರ ಹತ್ತನೇ ಕವನ ಸಂಕಲನ. ಕಳೆದ ಸುಮಾರು ೪೫ ವರುಷಗಳಿಂದ ಕಾವ್ಯ ರಚಿಸುತ್ತಿರುವ ಲಕ್ಷ್ಮಣರಾವ್ ತಮ್ಮ ಕವನಗಳು ಹಾಗೂ ಭಾವಗೀತೆಗಳಿಂದ ಜನರ ಮನಸ್ಸನ್ನು ಗೆದ್ದಿರುವವರು. ತಾನು ವ್ಯಕ್ತಿಯಾಗಿ ಮತ್ತು ಕವಿಯಾಗೆ ಬೇರೆ ಬೇರೆಯಲ್ಲ. ತಾನು ಹೇಗೋ ತನ್ನ ಕಾವ್ಯವೂ ಹಾಗೇ ಎಂದು ತಿಳಿವ ಕವಿ ಅವರು. ಅವರಲ್ಲಿ ವ್ಯಕ್ತಿಯಾಗಿ ಪ್ರೀತಿ, ಸ್ನೇಹ, ವಿಷಾದ, ಹಾಸ್ಯ ಮತ್ತು ಖುಷಿ ಸಹಜವಾಗಿ ಇರುವುದರಿಂದಲೇ ಅವರಿಂದ ಪ್ರೇಮಕವಿತೆ, ಹಾಸ್ಯಕವಿತೆ, ಹನಿಗವಿತೆ ಇತ್ಯಾದಿಗಳು ಮೂಡಿ ಬಂದಿವೆ ಎಂದು ಲಕ್ಷ್ಮಣರಯರನ್ನು ಹತ್ತಿರದಿಂದ ಬಲ್ಲವರೆಲ್ಲರೂ ಭಾವಿಸುತ್ತಾರೆ.