Product Description
ಆನಂದ ಕುಮಾರಸ್ವಾಮಿ ಬಹಳ ದೊಡ್ಡ ವ್ಯಕ್ತಿ. ತಮ್ಮ ಜೀವನವನ್ನು ಕಳೆದಿದ್ದು ಶ್ರೀಲಂಕಾ, ಇಂಗ್ಲೆಂಡ್, ಭಾರತ, ಅಮೆರಿಕ ನಾಲ್ಕು ದೇಶಗಳಲ್ಲಿ. ನಾಲ್ವರು ಹೆಂಡತಿಯರು. ನಲ್ವತ್ತಕ್ಕೂ ಅಧಿಕ ಪುಸ್ತಕಗಳ ಕರ್ತೃ. ಇಪ್ಪತ್ತೈದಕ್ಕೂ ಹೆಚ್ಚು ಭಾಷೆಗಳ ಪರಿಚಯವಿದ್ದ ವಿದಾಂಸ.
ಇವರ ವಿಚಾರ ಪ್ರಪಂಚ ನಮ್ಮ ಪಾಲಿಗೆ ಇನ್ನೂ ಗಹ್ಯ, ಗೂಢ. ಅದರ ಬಗ್ಗೆ ಕೂಡಲೇ ನಿರ್ಣಯಕ್ಕೆ ಬರುವುದು ಚಪಲದ ಪರಮಾವಧಿ.
ಆನಂದ ಕುಮಾರಸ್ವಾಮಿ ಒಂದು ಹೆದ್ದಾರಿ
ಅವರೊಂದು ಸೇತುವೆ, ಆಧ್ಯಾತ್ಮಿಕ ಮತ್ತು ಮಾಮೂಲಿ
ಸಂಗತಿಗಳ ಸಂಪರ್ಕ ಕ್ರಾಂತಿ!
ಅವರ ವಿಚಾರಗಳು ಬಹಳ ಹಳೆಯವು.
ಅದರಲ್ಲಿ ಆದಿಮ ಮಾನವ, ಮನಃಶಾಶ್ತ್ರ ಪಂಡಿತ,
ವೇದ, ಕುರಾನ್, ಬೈಬಲ್ ಎಲ್ಲ ಸಂಕರಗೊಂಡಿವೆ.
ಅವರೊಂದು ಮಹಾಸಂಕರ. ನಮ್ಮ ಕಾಲಕ್ಕೆ ಬೇಕಾದವರು, ಮುಂದಕ್ಕೂ ಬೇಕಾಗಬಹುದಾದವರು. ಇದು ಈ ಪುಸ್ತಕದ ತಿರುಳು. ಆನಂದ ಕುಮಾರಸ್ವಾಮಿ ಒಬ್ಬ ಯೋಧ, ಸಮುರಾಯ್. ಧೀರರ ಸಹವಾಸದಲ್ಲಿದ್ದರೆ ನಾವು ಧೀರರಾಗಬಹುದು. ಬನ್ನಿ ಆನಂದ ಕುಮಾರಸ್ವಾಮಿಯನ್ನು ಅರಿಯೋಣ.