Product Description
೧೯೭೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದ ಕೆ.ಎಸ್. ನರಸಿಂಹಸ್ವಾಮಿಯವರು, ಜನಪ್ರಿಯತೆಯ ದ್ಟೃಂದ ಆಧುನಿಕ ಕನ್ನಡ ಕವಿಗಳಲ್ಲಿಯೇ ಅಗ್ರಗಣ್ಯರಾಗಿರುವಂಥವರು. ಆಧುನಿಕ ಕಾವ್ಯ ಪ್ರಕಾರದ ವಿವಿಧ ಘಟ್ಟಗಳ ಪ್ರತೀಕವಾಗಿರುವ ಸಾಹಿತ್ಯ ಪಂಥಗಳನ್ನು ಪ್ರತಿನಿಧಿಸುವಂಥ ಸಾಹಿತ್ಯವನ್ನು ಸೃಷ್ಟಿಸಿದ್ದಾರಾದರೂ, ತಮ್ಮ ಮೂಲ ಮನೋಧರ್ಮವನ್ನು ಗುರುತಿಸಿಕೊಂಡು, ಸುಂದರವೂ ಸಹೃದಯಸ್ಪಂದಿಯೂ ಆಗಿರುವಂಥವರು; ಗದ್ಯ ಸಾಹಿತ್ಯಕ್ಕೂ ಕೆಲವೊಂದು ಸುಂದರ ಕೃತಿಗಳನ್ನು ನೀಡಿರುವಂಥವರು. ಅನುವಾದದ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು, ಉತ್ತಮವೂ ಅರ್ಥಪೂರ್ಣವೂ ಆಗಿರುವಂಥ ಕಾಣಿಕೆಗಳನ್ನು ಸಲ್ಲಿಸಿರುವಂಥವರು. ವಿಮರ್ಶಕ, ಸಂಶೋಧಕ ಹಾಗೂ ಜಾನಪದ ತಜ್ಞರೂ ಆದ ಡಾ. ರಾಮೇಗೌಡ (ರಾಗೌ) ಈ ಪುಸ್ತಕದ ಲೇಖಕರು.