Product Description
ನಮ್ಮದು ಭೌತವಾದದ ಜಗತ್ತು ಎಂದು ವಿಜ್ಞಾನ ನಿಖರವಾಗಿ ಹೇಳುತ್ತದೆ. ವೈಜ್ಞಾನಿಕ ಮನೋವೃತ್ತಿಯವರೆಲ್ಲರೂ ಇದನ್ನು ಒಪ್ಪುತ್ತಾರೆ. ಜೊತೆಗೆ ಭಾರತೀಯ ತತ್ವಶಾಸ್ತ್ರಜ್ಞರೆಲ್ಲರು ಪಂಚಭೌತಿಕ ವಸ್ತುಗಳು ಸೇರಿ ಜಗತ್ತಿನ ಜೀವ ಸೃಷ್ಟಿಯಾಗಿದ್ದು ಇದು ನಶ್ವರ ಪ್ರಪಂಚವೆಂದು ವಾದ ಮಂಡಿಸುತ್ತಾರೆ. ಇದು ನಶ್ವರವಾದರೆ ಶಾಶ್ವತವಾದುದೊಂದು ಇದೆಯೆಂದು ನಮ್ಮ ಪುರಾಣ-ಶಾಸ್ತ್ರಗಳಲ್ಲಿ ವರ್ಣಿತವಾಗಿದೆ. ಇದ್ದರೆ ಅದೆಲ್ಲಿದೆ ಎಂಬ ತರ್ಕವೂ ಇದೆ. ಮುಂದೆ ವಾದ-ವಿವಾದ-ತರ್ಕ-ಚರ್ಚೆಗಳು ನಡೆದು ಗೊಂದಲದ ಸನ್ನಿವೇಶ ನಿರ್ಮಾಣವಾಯಿತು. ಇದೀಗ ‘ಭೌತವಾದೀಯ ಚಿಂತನೆಗಳು’ ಕೃತಿಯಲ್ಲಿ ಕೆಲವೊಂದು ಗೊಂದಲಗಳನ್ನು ಬಿಡಿಸುವ ಪ್ರಯತ್ನ ಮಾಡಲಾಗಿದೆ. ಭೂಮಿ ಸೃಷ್ಟಿಯಾದ ಕಾಲಾಂತರದಲ್ಲಿ ಕಾಣಿಸಿಕೊಂಡ ಮಾನವ ಇಂದಿನ ಹಂತ ತಲುಪಿ, ಬೌದ್ಧಿಕ ಚಿಂತನೆಗೆ ಪದಾರ್ಪಣೆ ಮಾಡಿ ಸತ್ಯಸಂಗತಿಯನ್ನರಿಯುವ ಕುತೂಹಲ ಮತ್ತು ಹಟದಿಂದ ವಿವಿಧ ಚಿಂತನೆಗಳಲ್ಲಿ ತೊಡಗಿದ್ದಾನೆ. ಪುರಾಣೇತಿಹಾಸಗಳಲ್ಲಿ ದಾಖಲಾದ ಹಲವು ವಿಷಯಗಳನ್ನು ಇಲ್ಲಿ ಮಂಡಿಸಲಾಗಿದೆ.