Quantity
Product Description
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಸದೀಯ ಪ್ರಜಾಸತ್ತೆಗೆ ಸೋಲುಂಟಾದರೆ ದಂಗೆ, ಅರಾಜಕತೆ ಮತ್ತು ಕಮ್ಯುನಿಸಮ್ಮಿನಲ್ಲೇ ಅದು ಪರ್ಯವಸಾನವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಅಂದರೆ ಕಮ್ಯುನಿಸಂ, ಕಮ್ಯುನಿಸ್ಟರು ಅತ್ಯಂತ ಅಪಾಯಕಾರಿ ಎಂದೇ ಅವರು ಪರಿಗಣಿಸಿದ್ದರು.ಆದಾಗ್ಯೂ ಸ್ವಯಂ ಘೋಷಿತ ಬುದ್ದಿಜೀವಿಗಳು ಮತ್ತು ಎಡಪಂಥೀಯರು ಹಾಗೂ ಜಿಹಾದಿ ಮನಸ್ಥಿತಿಯವರನ್ನು ಶಾಂತಿ ಪ್ರಿಯರೆಂದು ಮತ್ತು ಸನಾತನ ಧರ್ಮೀಯರನ್ನು ಕೋಮುವಾದಿಗಳೆಂದು ಬಿಂಬಿಸುವ ಷಡ್ಯಂತ್ರ ನಡೆದೇ ಇದೆ. 'ನಾನೂ ಕಾಫಿರ' ಕೃತಿಯು ಬಾಬಾ ಸಾಹೇಬರು ವಸ್ತುನಿಷ್ಠವಾಗಿ ಮಾಡಿದ ಸಂಶೋಧನೆಯ ಫಲವಾಗಿ ದೊರಕಿದ ಇಸ್ಲಾಮಿನ ಮತಾಂಧತೆಯ ಚಿತ್ರಣವನ್ನು ಸಮಗ್ರವಾಗಿ ಕಟ್ಟಿಕೊಟ್ಟಿದೆ. ಈ ಪುಸ್ತಕದಲ್ಲಿರುವ ಸಂಶೋಧನೆಯನ್ನು ಪರಿಣಾಮಕಾರಿಯಾಗಿ ಓದುಗರಿಗೆ ಮುಟ್ಟಿಸಲು ಬೇಕಾದ ಎಲ್ಲ ಮಾದರಿಯ ತಾಂತ್ರಿಕತೆಯನ್ನೂ ಇದರಲ್ಲಿ ಬಳಸಿಕೊಳ್ಳಲಾಗಿದೆ. ಮತಾಂಧತೆಯ ವಿಧ್ವಂಸಕ ಘಟನೆಗಳ ಪಟ್ಟಿಯ ಜೊತೆಗೆ ಅಂಬೇಡ್ಕರ್ ಅವರೊಳಗಿನ ರಾಷ್ಟ್ರೀಯತೆ, ಭಾರತೀಯತೆಯ ಆಳ ಪದರಗಳನ್ನು ಮೂಲ ದಾಖಲೆಗಳ ಮುಖಾಂತರವೇ ತೋರಿಸಿಕೊಟ್ಟಿರುವುದು ವಿಶೇಷ. ಈ ಪುಸ್ತಕವು ಸಂಶೋಧನಾ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಳ್ಳುವ ಎಲ್ಲ ಕುರುಹುಗಳನ್ನೂ ತೋರಿದೆ.
Binding
Soft Bound
Author
Dr Sudhakara Hosalli
ISBN-13
9788190922883
Number of Pages
248
Publisher
Swarastra Publication, Mysuru
Publication Year
2026
Height
2 CMS
Length
22 CMS
Weight
500 GMS
Width
14 CMS
Language
Kannada