Product Description
ಕೈಮರದ ನೆಳಲಲ್ಲಿ ಒಂದು ದೀರ್ಘ ಕವಿತೆ. ಒಂದು ಹೊಸಬಗೆಯ ಕಥನ ಕವಿತೆ. ಇಲ್ಲಿಯ ಕಥನದಲ್ಲಿ ಕಥನಕ್ಕಿಂತ ಅಕಥನವೇ ಹೆಚ್ಚು. ‘ಐದಾರು ಮಂದಿ ಗೆಳೆಯರು ಒಂದೆಡೆ ಕುಳಿತು ತಮ್ಮ ತಮ್ಮ ಜೀವನಾನುಭವಗಳಲ್ಲಿ ತಮಗೆ ಸಾರವತ್ತಾದ್ದನಿಸಿದ್ದನ್ನು ಹೇಳಿಕೊಂಡಿದ್ದಾರೆ.’ ಮಾಸ್ತಿಯವರ ‘ನವರಾತ್ರಿ’ಯ ತಂತ್ರವನ್ನು ಇದು ನೆನಪಿಸಿದರೂ, ಇಲ್ಲಿ ಕಾಣುವ ಅಕಥನ ಮಾರ್ಗ ತೀರಾ ಭಿನ್ನವಾದದ್ದೆನ್ನಬೇಕು. ಕೈಮರದ ನೆಳಲಲ್ಲಿ ಸೇರಿದವರು ಹೇಳುವುದು ತಮ್ಮ ಇತಿ ವೃತ್ತವನ್ನಲ್ಲ; ತಾವು ಕಂಡ ಇನ್ನೊಬ್ಬರ ಇತಿವೃತ್ತವನ್ನು ಅವರು ಬರೆಯುವುದು ನಕಾಶೆಯನ್ನಲ್ಲ. ಚಿತ್ರಮೂಡುವುದಕ್ಕೆ ಮುನ್ನಿನ ನೆಲೆಯ ಚುಕ್ಕಿಗಳನ್ನು ಇಡುವುದಷ್ಟೇ ಆ ಅಕಥನ ಕ್ರಮದ ತಂತ್ರವಾಗಿದೆ. ಚುಕ್ಕಿಗಳನ್ನು ಹೇಗೆ ಕೂಡಿಸುತ್ತೇವೆಯೋ, ಹಾಗೆ ನಕಾಶೆ ನಿರ್ಮಿಸಿಕೊಳ್ಳುತೇವೆಯೋ ಅದು ನಮ್ಮ ನಮ್ಮ ಓದಿನ ಪ್ರಾಪ್ತಿ. ಆದುದರಿಂದಲೇ ಹೊಳೆಯುವ ಚುಕ್ಕಿಗಳು ಮತ್ತು ಖಾಲಿಬಿಟ್ಟ ಆಕಾಶ ಕೂಡಿಕೊಂಡು ಈ ಕವಿತೆಯ ಹಂದರ ಸಿದ್ಧವಾಗಿದೆ. ಬದುಕಿನ ಗುಂಭತೆಗೆ ಇದು ಕವಿ ಅರ್ಪಿಸುವ ಕನಿಷ್ಠ ಮರ್ಯಾದೆ.