Product Description
ಈ ಕಾದಂಬರಿ ಅಸ್ಪೃಶ್ಯ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಇಕ್ಕಟ್ಟು ಬಿಕ್ಕಟ್ಟುಗಳನ್ನು ರಾಜಕೀಯ ನೆಲದಲ್ಲಿ ಶೋಧಿಸುವ ಕೃತಿಯಾಗಿದೆ.
... ಹಿಂದುತ್ವದ ಗಟ್ಟಿ ತಳಹದಿಯಲ್ಲಿ ನಿಂತ ಹಿಂದುತ್ವವಾದೀ ಶಕ್ತಿಗಳು ಹಾಗೂ ಹಿಂದೂಧರ್ಮದ ಆಧ್ಯಾತ್ಮಿಕ ನೇತೃತ್ವವನ್ನು ವಹಿಸುವ ಸಾಧುಸನ್ಯಾಸಿಗಳಲ್ಲಿರುವ ಅಸಂಗತತೆಗಳು, ಮಂದಿರ ಮಠಗಳಲ್ಲಿರುವ ಸಾಧು ಸನ್ಯಾಸಿಗಳ ರಾಜಕೀಯ ಅಪರಿಪಕ್ವತೆ ಹಾಗೂ ಹಿಂದೂಗಳು ಯಾವ ಧರ್ಮವನ್ನು ಅನುಸರಿಸುತ್ತಾರೋ ಆ ಧರ್ಮದ ಜಾತಿವ್ಯವಸ್ಥೆಯ ಪೊಳ್ಳುತನ , ದಲಿತ ಚಳುವಳಿಯ ವೈಫಲ್ಯ, ಅಧಿಕಾರ ಮತ್ತು ಸ್ವಾರ್ಥಕಾರಣದ ಟೊಳ್ಳುತನ, ರಾಜಕೀಯ ಅಪರಾಧ, ಭ್ರಷ್ಟಾಚಾರ, ಸಂಪತ್ತಿನ ದುರ್ವ್ಯಯ, ಇತ್ಯಾದಿ ವಿಚಾರಗಳನ್ನು ಈ ಕೃತಿ ದಾಖಲಿಸುತ್ತದೆ. ಜನತಂತ್ರದ ಉಪಯೋಗವನ್ನು ಅತ್ಯಂತ ಸಾವಧಾನದಿಂದ, ಸಂವೇದನಾಶೀಲತೆಯಿಂದ, ವಿವೇಕದಿಂದ, ಸುಸಂಕೃತ ಪದ್ಧತಿಯಿಂದ ಮಾಡದಿದ್ದರೆ ಹಾಗೂ ದೀರ್ಘಕಾಲದ ರಾಜಕೀಯ ಚಿಂತನೆಗಳಿಲ್ಲದಿದ್ದರೆ ಜನಸಾಮಾನ್ಯರ ಬದುಕು ಹೇಗೆ ಅತಂತ್ರವಾಗುತ್ತದೆ, ಹಾಗೆ ಅನರ್ಥಗಳನ್ನು ಆಹ್ವಾನಿಸುತ್ತದೆ ಎಂಬುದನ್ನೂ ಈ ಕಾದಂಬರಿ ಸಶಕ್ತವಾಗಿ ಅಭಿವ್ಯಕ್ತಿಸಿದೆ.
(ಅನುವಾದಕರ ಅನಿಸಿಕೆಯಿಂದ )