Product Description
‘ಕುದಿವ ನೀಲಿಯ ಕಡಲು’ ಕವನ ಸಂಕಲನದಲ್ಲಿ ‘ಯುಗಾದಿ’ಯನ್ನು ಕುರಿತ ಐದು ಪದ್ಯಗಳೂ, ಕಿ.ರಂ. ನಾಗರಾಜರನ್ನು ಕುರಿತ ಎರಡು ಪದ್ಯಗಳೂ, ಡಿ.ಆರ್.ನಾಗರಜ್, ಬಸವಣ್ಣ, ಅಂಬೇಡ್ಕರ್, ಗಾಂಧಿ, ಕಾರ್ಲ್ ಮಾರ್ಕ್ಸ್, ಬೆಂಜಮಿನ್ ಮೊಲಾಯಿಸ್, ಶೂದ್ರ, ರಾಮಚಂದ್ರಶರ್ಮ, ರಾಮಕೃಷ್ಣ ಹೆಗಡೆ ಕುರಿತ ಒಂದೊಂದು ಪದ್ಯಗಳೂ ಇವೆ. ಇವೆಲ್ಲ ಡಾ.ಸಿದ್ಧಲಿಂಗಯ್ಯನವರು ಒಂದು ಸಮುದಾಯದ ಪ್ರತಿನಿಧಿಯಾಗಿ, ಹರಿಕಾರನಾಗಿ, ನಾಯಕನಾಗಿ ಪ್ರಶ್ನಿಸುವ ಅಥವಾ ಕೊರಳಪಟ್ಟಿಯನ್ನು ಹಿಡಿಯುವ ಬದಲಾಗಿ ‘ಎಲ್ಲರೆದೆಯ ನೋವು ಅಳಿದು ನವಜೀವನ ಮೂಡಲಿ’ ಎನ್ನುವ ವಿಶ್ವಮಾನವತೆಯ ಸಂದೇಶ ಸಾರಲು ತವಕಿಸುತ್ತವೆ.