Product Description
೧೯೯೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿರುವ ಶ್ರೀ ದೇವನೂರ ಮಹಾದೇವ ಅವರು ರಚಿಸಿರುವುದು ಮೂರೇ ಕೃತಿಗಳಾದರೂ ರ್ಟ್ರಾಯ ಮಟ್ಟದ ಖ್ಯಾತಿಯನ್ನು ಗಳಿಸಿರುವಂಥವರು. ಇಷ್ಟು ಕಡಿಮೆ ಗಾತ್ರದ ಸಾಹಿತ್ಯವನ್ನು ರಚಿಸಿ ಇಷ್ಟೊಂದು ಖ್ಯಾತಿಯನ್ನು ಗಳಿಸಿರುವ ಇನ್ನೊಬ್ಬ ಲೇಖಕ ಬಹುಶಃ ಭಾರತೀಯ ಸಾಹಿತ್ಯದಲ್ಲೇ ಇಲ್ಲವೇನೋ ! ಇದು ಅವರ ಕೃತಿಗಳ ಅಂತಸ್ಸತ್ವಕ್ಕೆ ಸಾಕ್ಷಿಯಾಗಿದೆ. ತಾವು ಕಂಡ ಸಮಾಜದ ಯಥಾರ್ಥ ಚಿತ್ರವನ್ನು ಯಾವುದೇ ಕೃತಕ ಅಲಂಕರಣವಿಲ್ಲದೆ, ಅತ್ಯಂತ ಸಮರ್ಥವಾಗಿ ಅವರು ತಮ್ಮ ಸಾಹಿತ್ಯದಲ್ಲಿ ಬಿಂಬಿಸಿದ್ದಾರೆ. ಕಲಾತ್ಮಕತೆ ತುಂಬ ಸಹಜವಾಗಿ ಅವರ ಕೃತಿಗಳಲ್ಲಿ ಮೈದಳೆದಿದೆ. ಹೀಗಾಗಿ, ಅವರು ಕನ್ನಡ ಸಾಹಿತ್ಯ ಲೋಕದ, ಅಷ್ಟೇ ಏಕೆ, ಭಾರತೀಯ ಸಾಹಿತ್ಯ ಲೋಕದ ವಿಶಿಷ್ಟ ಲೇಖಕರೆನ್ನಿಸಿಕೊಂಡಿದ್ದಾರೆ. ನಮ್ಮ ಹಿರಿಯ ಲೇಖಕರಲ್ಲಿ ಒಬ್ಬರೂ, ಸೂಕ್ಷ್ಮ ಸಂವೇದನೆಯ ಹಾಗೂ ವಸ್ತುನಿಷ್ಠ ವಿಮರ್ಶ ದೃಷ್ಟಿಯ ಸಹೃದಯರಾದ ಶ್ರೀ ಎನ್.ಪಿ. ಶಂಕರನಾರಾಯಣ ರಾವ್ ಈ ಪುಸ್ತಕದ ಲೇಖಕರು..