Select Size
Quantity
Product Description
ಸಂತೆಕಸಲಗೆರೆ ಪ್ರಕಾಶ್ ಅವರ `ಪ್ರತಿಮೆ ಇಲ್ಲದ ಊರು’ ಕಥಾಸಂಕಲನವಾಗಿದೆ. ಈ ಸಂಕಲನದಲ್ಲಿರುವ ಕಥೆಗಳ ಕಲಾತ್ಮಕ ಯಶಸ್ಸು ಮತ್ತು ಮಿತಿಗಳನ್ನು ಕುರಿತು ಬರೆಯುವುದಕ್ಕಿಂತಲೂ ಹೆಚ್ಚು ಸಂತೆಕಸಲಗೆರೆ ಪ್ರಕಾಶ್ ಅವರು ಇಲ್ಲಿ ತೋರಿರುವ ಆಸಕ್ತಿ, ಒತ್ತಾಸೆಗಳ ಬಗ್ಗೆ ನಮಗೆ ಮೆಚ್ಚುಗೆ ಮೂಡುತ್ತದೆ. ಅವರು 'ನಿಶ್ಯಬ್ದವನ್ನು ಪ್ರಶ್ನಿಸಿದ ಜೋಕಾಲಿಯ ಜೀಕು' ಎಂಬ ತಮ್ಮ ಮುಮ್ಮಾತುಗಳಲ್ಲಿ ಗಾಂಧೀ ಚಿಂತನೆಯ ಸಮಕಾಲೀನ ಅಗತ್ಯದ ಬಗ್ಗೆ ಆಶಾವಾದಿಯಾಗಿದ್ದಾರೆ. ತಮ್ಮ ಕಥಾಪಾತ್ರಗಳು ಗಾಂಧಿ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಲು ಹಾಗೂ ಅಂಥ ಮಾರ್ಗಕ್ಕಾಗಿ ತುಡಿಯುವ ಜೀವಗಳು ಎನ್ನುತ್ತಾರೆ. ಅವರ ಪ್ರಕಾರ ಅವರ ಕಥೆಗಳಲ್ಲಿ ಗಾಂಧಿ ಒಂದು ಸಂಚಾರಿ ಹಾಗೂ ಸ್ಥಾಯಿಭಾವ. ಪ್ರಕಾಶ್ ಅವರು ಗಾಂಧೀ ಮೌಲ್ಯಗಳಾದ ಅಹಿಂಸೆ ಮತ್ತು ಮನುಷ್ಯನ ಮನಃಪರಿವರ್ತನೆಯ ಬಗ್ಗೆ ಅಪಾರ ವಿಶ್ವಾಸವನ್ನು ಪ್ರಕಟಿಸುತ್ತಾರೆ. ಇಲ್ಲಿನ ಯಾವ ಕಥೆಯಲ್ಲೂ ಗಾಂಧೀಜಿಯ ನೇರ ಪ್ರವೇಶವಿಲ್ಲ. ಅವರ ವ್ಯಕ್ತಿತ್ವ ಪ್ರೇರಣೆಗಳನ್ನು ಸಾಂಕೇತಿಕವಾಗಿ ಪ್ರತಿಮೆ ರೂಪಕಗಳ ನೆಲೆಯಲ್ಲಿ ಚಿತ್ರಿಸಲಾಗಿದೆ. ಲೇಖಕರು ಸಮಕಾಲೀನ ಭಾರತದ ಅನೇಕ ವೈದೃಶ್ಯಗಳನ್ನು, ಭ್ರಷ್ಟ ವ್ಯವಸ್ಥೆಯನ್ನು ಮತ್ತು ಸಮಾಜದಲ್ಲಿನ ನೈತಿಕ ಅಧಃಪತನವನ್ನು ಚಿತ್ರಿಸುತ್ತಾ ಅವುಗಳನ್ನು ಗಾಂಧೀ ಮೌಲ್ಯಗಳಿಗೆ ಮುಖಾಮುಖಿಯಾಗಿಸುತ್ತಾರೆ.
Weight
300 GMS
Length
22 CMS
Width
20 CMS
Author
Santhekasalagere Prakash
Publisher
Ankitha Pusthaka
Publication Year
2023
Number of Pages
144
Binding
Soft Bound
Language
Kannada