Product Description
ವಿದ್ಯಾರ್ಥಿಗಳಿಗೆ ಶಿಕ್ಷಣತರಗತಿಗಳನ್ನು ಪ್ರಾರಂಭಿಸುತ್ತಾ, “ನಿಮ್ಮಲ್ಲಿ ಜೀವನದಲ್ಲಿ ಮೇಲೆ ಬರಬೇಕೆಂದುಕೊಂಡಿರುವವರು ಕೈಗಳನ್ನು ಮೇಲೆತ್ತಿರಿ” ಎಂದು ಕೇಳಿದಾಗ ಎಲ್ಲರೂ ಕೈ ಎತ್ತುತ್ತಾರೆ. ಕೆಲವರು ನಿಂತುಕೊಂಡು ಮತ್ತಷ್ಟು ಮೇಲಕ್ಕೆ ಕೈ ಎತ್ತುತ್ತಾರೆ. “ಯಾವ ವಯಸ್ಸಿನಲ್ಲಿ?” ಎನ್ನುವ ಎರಡನೆಯ ಪ್ರಶ್ನೆಗೆ ಹಾಲ್ನಲ್ಲಿ ನಿಶ್ಯಬ್ದ ಆವರಿಸಿಕೊಳ್ಳುತ್ತದೆ. ಮೂಲೆಯಿಂದ ಯಾರೋ “ಇಪ್ಪತ್ತೈದು ವರ್ಷಗಳಿಗೆ” ಎನ್ನುತ್ತಾರೆ.
“ಆಗ ಏನು ನಡೆಯುತ್ತದೆ? ಕೆಲಸ ಸಿಗುವುದೇ? ಮದುವೆಯಾಗುವುದೇ?(ನಗೆ). ನಿಜವಾಗಿಯೂ ಮೇಲೆ ಬರುವುದು ಎಂದರೇನು? ಒಬ್ಬ ಲಕ್ಷಾಧಿಪತಿ ಮೂವತ್ತು ವರ್ಷಗಳಿಗೇ ಮುದುಕನಾಗಿಬಿಟ್ಟ. ಮತ್ತೊಬ್ಬ ತಾಯಿ ತಂದೆಯರನ್ನು ಅನಾಥಾಶ್ರಮದಲ್ಲಿ ಸೇರಿಸಿದ. ಇವರು ಜೀವನದಲ್ಲಿ ಮೇಲೆ ಬಂದ ಹಾಗಾ?” ದೊಡ್ಡವರು ಕೂಡಾ ಬಹಳ ಬೇಗ ಉತ್ತರಿಸಲಾಗದ ಪ್ರಶ್ನೆ.
ಶಠಗೋಪದ ರಹಸ್ಯವನ್ನು ವಿಶದೀಕರಿಸುತ್ತಾ, ಷಡ್ಗುಣ ಐಶ್ವರ್ಯಗಳನ್ನು ವಿವರಿಸುತ್ತಾ, ವ್ಯಕ್ತಿತ್ವವಿಕಾಸವೆಂದರೆ “ಸ್ವಾರ್ಥವನ್ನು ಬೆಳೆಸಿಕೊಳ್ಳುವುದು” ಎಂದ ಕೆಲವರ ಅಭಿಪ್ರಾಯಗಳನ್ನು ಛಿನ್ನಭಿನ್ನಗೊಳಿಸುತ್ತಾ, ಮಾರಾಟದಲ್ಲಿ ಎರಡು ಕೋಟಿ ರೂಪಾಯಿಗಳಿಗೂ ಮೇಲ್ಪಟ್ಟು ಸಾಧನೆ ಮಾಡಿದ ‘ವಿಜಯಾನಿಕಿ ಐದು ಮೆಟ್ಲು’(ಕನ್ನಡ: ವಿಜಯಕ್ಕೆ ಐದು ಮೆಟ್ಟಿಲು) ಪುಸ್ತಕದ ಲೇಖಕ ನೀಡುತ್ತಿರುವ ಮತ್ತೊಂದು ಮಾಸ್ಟರ್ ಪೀಸ್ “ಕಣಿವೆಯಿಂದ ಶಿಖರಕ್ಕೆ”.