Select Size
Quantity
Product Description
ಈ ಕೃತಿಯು ದಲಿತರ ಮೇಲಿನ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಆ ಕಾಲದ ಜಾತಿ ವ್ಯವಸ್ಥೆಯನ್ನು ನಮ್ಮ ಮುಂದಿಡುತ್ತದೆ. ಮಹಾರ ಜಾತಿಯ ಯುವಕನೊಬ್ಬ ತನ್ನ ಜಾತಿ ಮುಚ್ಚಿಟ್ಟು ವಿದ್ಯಾವಂತನಾಗಿ ಅಧ್ಯಾಪಕ ವೃತ್ತಿ ಕೈಗೊಂಡು ಎಲ್ಲರೊಂದಿಗೆ ಬೆರೆತು ಕೊನೆಗೆ ಎಲ್ಲವೂ ಗೊತ್ತಾಗಿ ದುರಂತ ಸಾವನ್ನು ಕಂಡ ಇಲ್ಲಿನ ಕಥಾನಾಯಕನ ಮೂಕ ವೇದನೆ ಪ್ರತಿ ಪುಟದಲ್ಲೂ ಗೋಚರಿಸುತ್ತದೆ. ಸವರ್ಣೀಯರ ಕ್ರೌರ್ಯದ ಪರಮಾವಧಿ ಈ ಕೃತಿಯಲ್ಲಿ ಎಲ್ಲೆ ಮೀರಿರುತ್ತದೆ. ದಲಿತರು ವಿದ್ಯಾವಂತರಾದರೂ ಎಲ್ಲಿಯೇ ಕಾಲಿಡಲಿ ಜಾತಿಯ ಮುಳ್ಳು ಚುಚ್ಚುತ್ತಲೇ ಇರುತ್ತದೆ. ಸಮಾಜ ವ್ಯವಸ್ಥೆಯ ಬಗೆಗಿನ ಮಾತು ಮತ್ತು ಸಂಭಾಷಣೆಗಳು ಬಹಳ ತೀಕ್ಷ್ಯ ಮತ್ತು ಆಳವಾಗಿವೆ. ದಲಿತೋದ್ಧಾರ ಎನ್ನುತ್ತಲೇ ಬೆನ್ನ ಹಿಂದೆ ಇರಿಯುವ ರಾಜಕಾರಣಿಗಳ ಪರಿಚಯ ಮಾರ್ಮಿಕವಾದ ಮಾತುಗಳಲ್ಲಿ ವ್ಯಕ್ತವಾಗಿದೆ. ದಲಿತರ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುವ ಮಂದಿ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಾರೆ
Author
Dr Prameela Madhav
Binding
Soft Bound
Number of Pages
200
Publication Year
2022
Publisher
Nava Karnataka Publications Pvt Ltd
Height
2 CMS
Length
22 CMS
Weight
250 GMS
Width
14 CMS
Language
Kannada