Select Size
Quantity
Product Description
ನಿಧಾನವಾಗಿ ಅಂಧತ್ವದೆಡೆಗೆ ಜಾರುತ್ತಿರುವ ಮನುಷ್ಯನೊಬ್ಬನ ನೈಜ ಕಥೆ ಎಂಬ ಉಪಶೀರ್ಷಿಕೆಯೊಡನಿರುವ ‘ಬೆಳಕು ನಂದಿದಾಗ’ ಎಂಬುದು ಮೂಲದಲ್ಲಿ ಎಲ್. ಸುಬ್ರಮಣಿ ಅವರ ಕೃತಿ. ಡಾ. ಎಂ.ಎಸ್.ಎಸ್. ಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತಾನು ಕೂಡ ಇತರರಂತೆ ಸಾಮಾನ್ಯ ಜೀವನ ನಡೆಸಲು ಪ್ರಯತ್ನಿಸುವಾಗ ಎದುರಿಸಬೇಕಾದ ಹೋರಾಟಗಳನ್ನು ಒಳಗೊಂಡ ಸ್ಪೂರ್ತಿದಾಯಕ ಕೃತಿ ಇದು. ಕ್ರಮೇಣ ಆವರಿಸುತ್ತಿರುವ, ಗುಣವಾಗದ, ಆತ್ಮವಿಶ್ವಾಸವನ್ನೇ ದುರ್ಬಲಗೊಳಿಸುವ ಈ ಅಂಧತ್ವ, ದೃಷ್ಟಿ ನಾಶದ ಪರಿಣಾಮಗಳು ಹಾಗೂ ಅವುಗಳನ್ನು ಅವರು ಹೇಗೆ ನಿಭಾಯಿಸಿದರು ಮುಂತಾದ ವಿಷಯಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. Retinitis Pigmentosa ಎಂಬ ಕಣ್ಣಿನ ಬೇನೆಯ ಲಕ್ಷಣವೆಂದರೆ ಬಹುಮಂದಿ ರೋಗಿಗಳಲ್ಲಿ ಇದರಿಂದ ಇದ್ದಕ್ಕಿದ್ದಂತೆ ದೃಷ್ಟಿ ನಾಶವಾಗಿ, ಅದರ ಪರಿಣಾಮದಿಂದ ವ್ಯಕ್ತಿಗಳು ಸೊರಗುತ್ತಾರೆ. ಸಾಮಾನ್ಯ ಜೀವನ ನಡೆಸುವಾಗಿನ ಅವರ ಬವಣೆಗಳನ್ನು ಈ ಕೃತಿ ವಿವರಿಸುತ್ತದೆ. ಕಷ್ಟಗಳನ್ನು ನಿರ್ವಹಿಸುವ, ಎದುರಿಸುವ ಧೈರ್ಯ, ಸ್ಪೂರ್ತಿ ನೀಡುತ್ತದೆ.
Weight
100 GMS
Length
22 CMS
Width
14 CMS
Height
1 CMS
Author
Dr M S S Murthy
Publisher
Nava Karnataka Publications Pvt Ltd
Publication Year
2021
Number of Pages
104
Binding
Soft Bound
Language
Kannada