Select Size
Quantity
Product Description
ವೈ.ಕೆ.ಸಂಧ್ಯಾ ಶರ್ಮಾ ಅವರ ಕಥಾ ಸಂಕಲನ ‘ಆಗಂತುಕರು’. ಸುಬ್ರಾಯ ಚೊಕ್ಕಾಡಿ.ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದು, ‘ಈ ಸಂಕಲನದಲ್ಲಿ ಹದಿನಾರು ಕಥೆಗಳಿವೆ. ಈ ಹದಿನಾರು ಕಥೆಗಳೂ ಗ್ರಾಮೀಣ ಬದುಕಿನ ಸುಖ ದುಃಖಗಳು, ಸಾವು, ಮಕ್ಕಳ ಸ್ವಾರ್ಥ ಹಾಗೂ ಧನದಾಹ,ಅಂತಃಕರಣದ ಉಕ್ಕು,ಮಹಿಳಾ ವಿಮೋಚನೆ, ಕೃತಘ್ನತೆ,...ಹೀಗೆ ಹತ್ತು ಹಲವು ವೈವಿಧ್ಯಪೂರ್ಣ ವಸ್ತುಗಳಿಂದ ಕೂಡಿವೆ. ಒಂದೇ ವಸ್ತುವಿಗೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚುಕಥೆಗಳಿದ್ದರೂ ಆ ಕಥೆಗಳು ಒಂದೇ ರೀತಿಯಲ್ಲಿರದೆ ಆ ವಸ್ತುವಿನ ವಿವಿಧ ಮೈಗಳನ್ನು ಅನಾವರಣಗೊಳಿಸುವ ರೀತಿ ಗಮನಾರ್ಹವಾಗಿದೆ.ಉದಾಹರಣೆಯಾಗಿ ಸಾವನ್ನು ವಸ್ತುವಾಗುಳ್ಳ "ಹುಟ್ಟು ಹಬ್ಬ",ಮಹಿಳಾ ವಿಮೋಚನೆ",ಪುನರಪಿ ಮರಣಂ"ಮೊದಲಾದ ಕಥೆಗಳನ್ನು ನೋಡಬಹುದು.ಯಶವಂತ ಚಿತ್ತಾಲರ "ಪಯಣ"ಕಥೆಯನ್ನು ನೆನಪಿಸುವ" ಹುಟ್ಟುಹಬ್ಬ"ಕಥೆಯಲ್ಲಿ ಮಾಧವರಾಯರು ತಮ್ಮ ಹುಟ್ಟುಹಬ್ಬದ ದಿನದಂದೇ ಸಾವನ್ನು ಕಾಣುವ ಅಪೂರ್ವ ಘಟನೆಯಿದೆ.ಅದೇ ,"ಪುನರಪಿ ಮರಣಂ"ಕಥೆಯಲ್ಲಿ ಸುಂದರ ಮೂರ್ತಿಯವರ ಸಾವು ಎರಡು ಸಲ ಸಂಭವಿಸುವ ವಿಚಿತ್ರ ಘಟನೆಯಿದೆ.ಅದೇ ಮಹಿಳಾ ವಿಮೋಚನೆಯ ಕಥೆಯು ಸತ್ಯವಾನ್ ಸಾವಿತ್ರಿಯ ಕಥೆಯನ್ನು ನೆನಪಿಸುವ ಹಾಗೆ ಕಥಾ ನಾಯಕಿಯು ತನ್ನನ್ನು ಒಯ್ಯಲು ಬಂದ ಯಮನನ್ನು ಜಾಣತನದಿಂದ ದೂರ ಮಾಡಿದ ಸ್ವಾರಸ್ಯಕರ ಕಥೆಯಿದೆ.ಅಂದರೆ ಈ ಎಲ್ಲ ಕಥೆಗಳ ಮೂಲಕ ಸಾವು ಎನ್ನುವ ಒಂದು ವಸ್ತುವನ್ನು ಭಿನ್ನ ಭಿನ್ನ ರೀತಿಯಿಂದ ಸಂಧ್ಯಾ ಶರ್ಮ ಅವರು ಅನಾವರಣಗೊಳಿಸಿದ ರೀತಿಯು ಗಮನಾರ್ಹ’ ಎಂದು ಹೇಳಿದ್ದಾರೆ. ಎಚ್ಚೆಸ್ವಿ ಅವರು ಕೃತಿಗೆ ಬೆನ್ನುಡಿ ಬರೆದಿದ್ದಾರೆ.
Weight
200 GMS
Length
22 CMS
Width
14 CMS
Height
2 CMS
Author
Y K Sandhya Sharma
Publisher
Sapna Book House Pvt Ltd
Publication Year
2021
Number of Pages
186
ISBN-13
9789354561016
Binding
Soft Bound
Language
Kannada