Select Size
Quantity
Product Description
ಈ ಕೃತಿ ಜೆ ಕೃಷ್ಣಮೂರ್ತಿ ಅವರ ವಚನ ಸಂಕಲನ, ಪ್ರಸ್ತುತ ಕೃತಿಯ ಮಹತ್ವ ವಿಷಯಸೂಚಿ ಹಂಚಿಕೆ ಆಗಿದೆ. ಜಿಡ್ಡು ಕೃಷ್ಣಮೂರ್ತಿ (1895-1986) ಭಾರತೀಯರಾಗಿದ್ದು, ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿ ಜಗತ್ತಿನೆಲ್ಲೆಡೆ ಉಪನ್ಯಾಸಗಳನ್ನು ನೀಡಿದ್ದಾರೆ. ಅವರು ಯಾವುದೇ ಜಾತಿ, ರಾಷ್ಟ್ರೀಯತೆ ಅಥವಾ ಧರ್ಮದ ಜತೆ ತಮ್ಮನ್ನು ಗುರುತಿಸಿಕೊಂಡವರಲ್ಲ ಮತ್ತು ಯಾವುದೇ ಸಂಪ್ರದಾಯಕ್ಕೆ ಗಂಟುಬಿದ್ದವರಲ್ಲ. ಅವರ ಬೋಧನೆಗಳು 20,000,000 ಪದಗಳನ್ನು ಮೀರಿದ್ದು 75 ಕ್ಕೂ ಹೆಚ್ಚು ಗ್ರಂಥಗಳ ರೂಪದಲ್ಲಿ ಪ್ರಕಟವಾಗಿವೆ; ಅಲ್ಲದೆ ಅವರ ಬೋಧನೆಗಳು 700 ಧ್ವನಿಸುರುಳಿಗಳ 1200 ವಿಡಿಯೊಗಳ ರೂಪದಲ್ಲಿ ಲಭ್ಯ. ಇಪ್ಪತ್ತೆರಡು ಭಾಷೆಗಳಲ್ಲಿ ಮುದ್ರಿತವಾದ ಅವರ ಗ್ರಂಥಗಳ 4,000,000 ಪ್ರತಿಗಳು ಮಾರಾಟವಾಗಿವೆ. ದಲೈ ಲಾಮಾ ಮತ್ತು ಮದರ್ ಥೆರೆಸಾ ಅವರ ಜತೆಗೆ ಕೃಷ್ಣಮೂರ್ತಿ ಅವರನ್ನು ಟೈಮ್' ಮ್ಯಾಗಜಿನ್ ಇಪ್ಪತ್ತನೆಯ ಶತಮಾನದ ಐವರು ಸಂತರಲ್ಲಿ ಒಬ್ಬರೆಂದು ಘೋಷಿಸಿದೆ. ಅರುವತ್ತೈದು ವರ್ಷಗಳ ಕಾಲ ಅವರು ಜಗತ್ತಿನ ವಿವಿಧ ಭಾಗಗಳಲ್ಲಿ ಸಂಚರಿಸಿ ತಮ್ಮ ಜೀವಿತದ ಕೊನೆಗಾಲದ ತನಕ ಅಂದರೆ 90ರ ಪ್ರಾಯದವರೆಗೆ ಬೃಹತ್ ಸಭೆಗಳನ್ನು ಉದ್ದೇಶಿಸಿ ಸತತವಾಗಿ ಮಾತನಾಡಿದ್ದಾರೆ. ತನ್ನದೂ ಸೇರಿದಂತೆ ಎಲ್ಲ ಬಗೆಯ ಆಧ್ಯಾತ್ಮಿಕ ಹಾಗೂ ಮಾನಸಿಕ ಅಧಿಕಾರ ನಿರಾಕರಣವು ಅವರ ಬೋಧನೆಯ ಮೂಲತತ್ತ್ವ, ಮನುಷ್ಯ ಸ್ವಜ್ಞಾನದ ಮೂಲಕ ಭಯ, ಅನುಬಂಧನ, ಅಧಿಕಾರ ಮತ್ತು ಅಂಧಶ್ರದ್ಧೆಗಳಿಂದ ಮುಕ್ತನಾಗಬೇಕು ಎಂದು ಅವರು ಹೇಳಿದರು. ಇದರಿಂದ ವ್ಯವಸ್ಥೆಯ ಹಾಗೂ ನಿಜವಾದ ಮಾನಸಿಕ ಬದಲಾವಣೆ ಉಂಟಾಗುತ್ತದೆ ಎಂದು ಅವರು ಸೂಚಿಸಿದರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
Author
Jiddu Krishnamurthy
Binding
Soft Bound
ISBN-13
9789392935565
Number of Pages
200
Publication Year
2022
Publisher
Vasanta Prakashana
Length
22 CMS
Weight
300 GMS
Width
20 CMS
Language
Kannada