Quantity
Product Description
ಈ ಕೃತಿ ರವೀಂದ್ರ ಕಥಾಮಂಜರಿಯ ಮೂರನೆಯ ಸಂಪುಟವಾಗಿದೆ. ಒಂದು ನಾಟಕ ಹಾಗೂ 19 ಕಥೆಗಳನ್ನು ಈ ಸಂಪುಟವು ಒಳಗೊಂಡಿದೆ. ನಾವು ಮಾಡುವ ಪಾಪಗಳ ಅರಿವಿದ್ದೂ ಕೂಡ ಅವುಗಳನ್ನು ಮುಚ್ಚಿಟ್ಟು ಕೊಳ್ಳುವುದು ಡಾಂಭಿಕತನವಾದರೆ, ಅದನ್ನು ಬೇರೆಯವರಿಗೆ ಹೇಳಿ ಹೃದಯವನ್ನು ಹಗುರ ಮಾಡಿಕೊಳ್ಳುವುದು ಒಂದು ಸರಳ ವಿಧಾನವೆನಿಸುತ್ತದೆ. ಆದರೆ ಇಲ್ಲಿನ ಹೀನ ಕೃತ್ಯವೆಂದರೆ ಮಾನವೀಯತೆಯನ್ನು ಬೋಧಿಸುತ್ತಾ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು. ಇದು ಸಂಸ್ಕಾರದಲ್ಲಿ ಬಿಂಬಿತವಾಗಿದೆ. ಹೂತಿಟ್ಟ ಹಣದ ಆಸೆಯಿಂದ ಪಡುವ ಪರಿಪಾಟಲು, ಏಕಾಕಿತನ, ಇವುಗಳಿಂದಾಗಿ ಆ ಧನದ ಬಗೆಗೆ ನಿರಾಸಕ್ತಿಯನ್ನು ತಳೆದು ಸರಳಬದುಕನ್ನೇ ಆಯ್ದುಕೊಳ್ಳುವ ಮೃತ್ಯುಂಜಯ ಇಂತಹ ಕಥೆಗಳು ನಮ್ಮ ಬಾಳಿಗೆ ಬೆಳಕು ನೀಡುವ ಹಣತೆಗಳಾಗಿವೆ. ಇಂತಹ ಪ್ರಮುಖ ಮಹತ್ವದ ಕಥೆಗಳು ಸಂಪುಟದಲ್ಲಿದೆ.
Binding
Soft Bound
Author
Ahobala Shankara
Number of Pages
479
Publication Year
2007
Publisher
Kuvempu Bhashaa Bharathi Pradhikaara
Height
5 CMS
Length
22 CMS
Width
14 CMS
Weight
500 GMS
Language
Kannada