Select Size
Quantity
Product Description
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಕವಿ-ನಾಟಕಕಾರ ಎಂದೇ ಚಿರಪರಿಚಿತರಿದ್ದರೂ ಅವರೊಬ್ಬ ಉತ್ತಮ ಕಾದಂಬರಿಕಾರ, ರಂಗ ಹಾಗೂ ಜಾನಪದ ತಜ್ಞರು ಕೂಡ. ಕಂಬಾರ ಅವರ ಕಾವ್ಯ-ನಾಟಕ-ಕಾದಂಬರಿಗಳ ಕುರಿತ ವಿಮರ್ಶಾತ್ಮಕ ಲೇಖನಗಳನ್ನು ಒಳಗೊಂಡಿವೆ. ಹಿರಿಯ ವಿಮರ್ಶಕ ಬಸವರಾಜ ಕಲ್ಗುಡಿ ಅವರು ಈ ಸಂಪುಟವನ್ನು ಸಂಪಾದಿಸಿದ್ದಾರೆ. ಮುನ್ನುಡಿಯಲ್ಲಿ ಕಲ್ಗುಡಿ ಅವರು ಹೀಗೆ ಬರೆದಿದ್ದಾರೆ-
ಕಂಬಾರರ ಕಾವ್ಯ, ನಾಟಕ, ಕಾದಂಬರಿಗಳು ಹಿಡಿದಿಡುವ ಕಥನವು ಕನ್ನಡದ ಚಿಂತನೆಯಲ್ಲಿ ಯಾವ ಬಗೆಯ ರಸಗ್ರಹಣಕ್ಕೆ, ವ್ಯಾಖ್ಯಾನಕ್ಕೆ ಹಾಗೂ ಸಂವಾದಕ್ಕೆ ಗುರಿಯಾಗಿದೆ ಎನ್ನುವುದನ್ನು ತಿಳಿಯುವ ಕೆಲಸವು, ಅವರ ಕೃತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಇನ್ನಷ್ಟು ಸಹಕಾರಿಯಾಗುತ್ತದೆ. ಆಧುನಿಕ ಕನ್ನಡದ ಚಿಂತನಾಲೋಕವು ಕಂಬಾರರ ಕೃತಿಗಳ ಜೊತೆಗೆ ಅಗಾಧವಾದ ಸಂವಾದವನ್ನು ಮಾಡಿದೆ. ಕಂಬಾರರ ಸಾಹಿತ್ಯ ಲೋಕದೊಳಗಿನ, ಕಲ್ಪನಾ ಲೋಕವು ತಂದುಕೊಟ್ಟ ಪ್ರತಿಭಾ ವಿನ್ಯಾಸವು ದೊಡ್ಡ ಹರಹಿನದು ಎನ್ನುವುದನ್ನು ಈ ಸಂವೇದನೆಯು ಗುರುತಿಸಿದೆ. ಆಧುನಿಕ ಕನ್ನಡದ ಬರಹದಲ್ಲೇ ಒಂದು ವಿಶಿಷ್ಟವಾದ, ವಿಭಿನ್ನವಾದ ದಾರಿಯನ್ನೂ, ಸೂಕ್ಷ್ಮ ಕಲಾಕುಸುರಿಯ ವೈವಿಧ್ಯತೆಯನ್ನೂ ಕಂಬಾರರ ಸಾಹಿತ್ಯ ಸೃಷ್ಟಿಸಿದೆ. ಕಂಬಾರರ ಸಾಹಿತ್ಯವನ್ನು ವಿಭಿನ್ನ ದೃಷ್ಟಿಯಲ್ಲಿ ನೋಡಿದ ಕನ್ನಡ ಚಿಂತನಾಲೋಕದ ವಿಶಿಷ್ಟವಾದ ಆಯ್ದ ಲೇಖನಗಳನ್ನು ಇಲ್ಲಿ ಸಂಪಾದಿಸಲಾಗಿದೆ. ಕಂಬಾರರ ಸಾಹಿತ್ಯ ಗ್ರಹಿಕೆಗೆ ಅವುಗಳ ವೈವಿಧ್ಯತೆ ಮತ್ತು ತಾತ್ವಿಕತೆಯ ಆಯಾಮಗಳ ಗ್ರಹಿಕೆಗೆ ಇವುಗಳು ಸಾಕಷ್ಟು ಅವಕಾಶ ಮಾಡಿಕೊಡುತ್ತವೆ ಎನ್ನುವ ನಂಬಿಕೆ ನನ್ನದು. ವಿಭಿನ್ನಚಿಂತನೆಯ ನೆಲೆಯಿಂದ ಬಂದ ಲೇಖಕರು ಕಂಬಾರರಿಗೆ ನುಡಿಯುವ ರೀತಿಯ ವೈವಿಧ್ಯತೆಯನ್ನು ಇಲ್ಲಿ ಓದುಗರು ಗ್ರಹಿಸಬಹುದಾಗಿದೆ.
Author
Basavaraja Kalgudi
Binding
Soft Bound
Number of Pages
340
Publication Year
2012
Publisher
Ankitha Pusthaka
Height
4 CMS
Length
22 CMS
Weight
400 GMS
Width
14 CMS
Language
Kannada